ವಿಷಯಕ್ಕೆ ಹೋಗಿ

ರೋಣ ಮತಕ್ಷೇತ್ರದ ಶಾಸಕರು ಶ್ರೀಯುತ ಜಿ.ಎಸ್‌ ಪಾಟೀಲ್‌ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ ಆಧುನಿಕ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಮುಂಡರಗಿ: ತಾಲ್ಲೂಕಿನ ಡೋಣಿ ಗ್ರಾಮದಲ್ಲಿನ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ `ಯಾತ್ರಿ ನಿವಾಸ~ ವನ್ನು ಶ್ರೀ ಹಾಲಸ್ವಾಮಿಜೀ ಮಠದ ಹಿರಿಯ ಮತ್ತು ಕಿರಿಯ ಸ್ವಾಮೀಗಳು, ಶ್ರೀ ಗುರು ಹಾಲಸೋಮೇಶ್ವರ ಸ್ವಾಮೀಜಿ ಮತ್ತು ಶ್ರೀ ಅಮೃತೇಶ್ವರ ಸ್ವಾಮಿಜೀ, ಹಾಗೂ
ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಶ್ರೀ ಮಠದ ಶಿಷ್ಯ ಬಂದು ಶ್ರೀಯುತ ಜಿ.ಎಸ್‌ ಪಾಟೀಲ್‌ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ " ಆಧುನಿಕ ಭಗೀರಥ ಪ್ರಶಸ್ತಿ " ನೀಡಿ ಗೌರವಿಸಲಾಯಿತು. 

                 " ಆಧುನಿಕ ಭಗೀರಥ ಪ್ರಶಸ್ತಿ " 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಗುರು ಹಾಲಸ್ವಾಮಿಗಳ ಡೋಣಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ2026: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ.

ಶ್ರೀ ಗುರು ಹಾಲಸ್ವಾಮಿಗಳ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪ ಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ ಪವಿತ್ರ ಪುಣ್ಯಕ್ಷೇತ್ರದ ಆರಾಧ್ಯ ದೈವವಾದ ಶ್ರೀ ಗುರು ಹಾಲಸ್ವಾಮಿಗಳ ವಾರ್ಷಿಕ ಜಾತ್ರಾ ಮಹೋತ್ಸವದ-2026, ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆದ ಈ ಸಭೆಯು ಗ್ರಾಮಸ್ಥರ ಒಗ್ಗಟ್ಟು ಹಾಗೂ ಶ್ರದ್ಧೆಗೆ ಸಾಕ್ಷಿಯಾಯಿತು. ಹಿರಿಯರ ಮಾರ್ಗದರ್ಶನ - ಭಕ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಹಿರಿಯರು ಅತ್ಯಂತ ಉತ್ಸಾಹದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ಗುರುಗಳ ಸೇವೆ ನಮ್ಮ ಭಾಗ್ಯ, ಈ ಬಾರಿಯ ಜಾತ್ರೆಯು ಇಡೀ ನಾಡೇ ಮೆಚ್ಚುವಂತೆ ನಡೆಯಬೇಕು" ಎಂದು ಆಶಿಸಿದರು. ವಿಶೇಷವಾಗಿ, ಯುವಕರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ "ಹೆಗಲಿಗೆ ಹೆಗಲು ಕೊಟ್ಟು" ಕಾರ್ಯನಿರ್ವಹಿಸಲು ಸನ್ನದ್ಧರಾದರು. " ಶ್ರೀ ಗುರು ಹಾಲಪ್ಪಜ್ಜನ ಈ ಬಾರಿಯ ಉತ್ಸವದಲ್ಲಿ ಯಾವುದೇ ಕುಂದು-ಕೊರತೆಗಳು ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಇದು ಕೇವಲ ಸಭೆಯಲ್ಲ, ಇದು ನಮ್ಮ ಭಕ್ತಿಯ ಸಂಕಲ್ಪ" ಎಂದು ಹಿರಿಯರು ಭಾವಪೂರ್ಣವಾಗಿ ನುಡಿದರು. ಶಿಸ್ತುಬದ್ಧ ಆಯೋಜನೆ ಜಾತ್ರೆಯ ಪ್ರತಿಯೊಂದು ಹಂತದಲ್ಲೂ ಅಚ್ಚುಕಟ್ಟುತನ ಕಾಯ್ದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ರಥೋತ್ಸವದ ಸಿದ್ಧತೆ: ಅಲಂಕಾರ...

​🚩 ಡೋಣಿ ಗ್ರಾಮದ ಶ್ರೀಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩​

​🚩 ಶ್ರೀ ಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩 ​ಇಂದು ನಮ್ಮ ಗ್ರಾಮದಲ್ಲಿ ಶ್ರೀ ಗುರು ಹಾಲೇಶನ ರಣಗಂಬ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಹಾಗೂ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಭಕ್ತಿ ಮತ್ತು ಪರಂಪರೆಯ ಈ ಸಮಾಗಮಕ್ಕೆ ಗ್ರಾಮದ ಸಮಸ್ತ ಭಕ್ತವೃಂದ ಸಾಕ್ಷಿಯಾಯಿತು. ​🥁 ಸಾಂಸ್ಕೃತಿಕ ಮೆರುಗು ​ಕಾರ್ಯಕ್ರಮಕ್ಕೆ ಕಳೆ ತಂದಿದ್ದು ಅಬ್ಬರದ ಡ್ರಮ್ ಸೆಟ್ ಮೇಳ ಮತ್ತು ನಾಡಿನ ಸಂಸ್ಕೃತಿಯ ಪ್ರತೀಕವಾದ ಡೊಳ್ಳಿನ ಮೇಳ . ತಾಳ-ಲಯಗಳ ಈ ಜುಗಲ್‌ಬಂದಿ ನೆರೆದಿದ್ದವರಲ್ಲಿ ಹೊಸ ಚೈತನ್ಯ ತುಂಬಿತು. ಇನ್ನು ಸೋಗಲದ ಆರತಿಯನ್ನು ಹಿಡಿದು ಶಿಸ್ತಿನಿಂದ ಸಾಗುತ್ತಿದ್ದ ತಾಯಂದಿರ ಪಾದಯಾತ್ರೆ ಮತ್ತು ಅವರ ಭಕ್ತಿಭಾವ ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿತು. ​✨ ಪೂಜ್ಯರ ದಿವ್ಯ ಸನ್ನಿಧಿ ​ಶ್ರೀಮಠದ ಹಿರಿಯ ಪೂಜ್ಯರಾದ ಶ್ರೀ ಗುರು ಹಾಲ ಸೋಮೇಶ್ವರ ಹಾಲ ಸ್ವಾಮಿಗಳ ಆಶೀರ್ವಾದ, ಕಿರಿಯ ಪೂಜ್ಯರಾದ ಶ್ರೀ ಅಮೃತೇಶ್ವರ ಶ್ರೀಗಳ ಮಾರ್ಗದರ್ಶನ ಹಾಗೂ ಮೌನ ಋಷಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಬಹಳ ಶ್ರದ್ಧ...

ಹಾಲಪ್ಪಜ್ಜನ ಪವಾಡ!ಕಳಸವು ರಥದತ್ತ ಸಾಗುತ್ತಿರುವಾಗ ಅನಿರೀಕ್ಷಿತವಾಗಿ ಸುರಿದ ಮಳೆರಾಯನ ಕೃಪಾಶೀರ್ವಾದ ಇಡೀ ಗ್ರಾಮವನ್ನೇ ಮಡಿಯಾಗಿಸಿತು.

ಶ್ರೀಗುರು ಹಾಲೇಶನ ರಥದ ಕಳಸಾರೋಹಣ:  ಭಕ್ತಿ-ಭಾವದ ಮಳೆಯಲ್ಲಿ ಮಿಂದೆದ್ದ ಡೋಣಿ ಗ್ರಾಮ ಡೋಣಿ ಗ್ರಾಮ: ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಸಾಕ್ಷಿಯಾದ ಡೋಣಿ ಗ್ರಾಮದಲ್ಲಿ, ಶ್ರೀಗುರು ಹಾಲಪ್ಪಜ್ಜನ ರಥದ ಕಳಸಾರೋಹಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಭಕ್ತರ ಸಾಗರ, ಮಂಗಳವಾದ್ಯಗಳ ನಿನಾದ ಮತ್ತು ಮಳೆರಾಯನ ಆಶೀರ್ವಾದದ ನಡುವೆ ಈ ದಿವ್ಯ ಕಾರ್ಯಕ್ರಮವು ಗ್ರಾಮದ ಇತಿಹಾಸದಲ್ಲಿ ಒಂದು ಸ್ಮರಣೀಯ ಪವಾಡದಂತೆ ಭಾಸವಾಯಿತು. ನೂತನ ಗೃಹದಿಂದ ಭಕ್ತಿಯ ಪಯಣ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ್ (KSRTC) ಅವರ ನೂತನ ನಿವಾಸದಿಂದ ಈ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸ ಮನೆಯ ಸಡಗರದೊಂದಿಗೆ, ಮನೆಯಿಂದ ಪ್ರಥಮ ಬಾರಿಗೆ ಪವಿತ್ರ ಕಳಸವನ್ನು ತರುವ ಮೂಲಕ ತಳವಾರ್ ಕುಟುಂಬವು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು. ವೈಭವದ ಮೆರವಣಿಗೆ ಮತ್ತು ಸಾಂಸ್ಕೃತಿಕ ನಿನಾದ ಮೆರವಣಿಗೆಯ ಉದ್ದಕ್ಕೂ ಡೊಳ್ಳು ಮತ್ತು ಡ್ರಮ್ ಸೆಟ್ ಮೇಳಗಳ ಗಂಭೀರ ನಿನಾದ ಮುಗಿಲು ಮುಟ್ಟಿತ್ತು. ಮುತ್ತೈದೆಯರು ಮಂಗಳಾರತಿಯನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದರೆ, ಇಡೀ ವಾತಾವರಣವು ಮಂಗಳಮಯವಾಗಿತ್ತು. ಭಕ್ತಿಯ ಹೊರೆ: ಶ್ರೀ ಯಲ್ಲಪ್ಪ ತಳವಾರ್ ಅವರ ಕಿರಿಯ ಪುತ್ರರಾದ ಮಂಜುನಾಥ್ ತಳವಾರ್ ಅವರು ಶ್ರೀ ಗುರು ಹಾಲೇಶನ ರಥದ ಕಳಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ತಮ್...