ವಿಷಯಕ್ಕೆ ಹೋಗಿ

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫



ಜಾತ್ರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ


ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ.
ರಣಗಂಬ 
ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.

ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ. ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ, 
ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ 
ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ: 31-03-2025ನೇ ಸೋಮವಾರದಂದು 10-30 ಕ್ಕೆ ಶ್ರೀ ಮಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ,
ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ,( ಶ್ರೀ ಬಿ.ಎಸ್ ಕೆರೆ ವಕೀಲರು ಇವರ ಮನೆಯಿಂದ ರಥೋತ್ಸವಕ್ಕೆ ಹೂವಿನ ಸೇವೆ.) ಸಾಯಂಕಾಲ 5:00 ಗಂಟೆಗೆ ಮಹಾರಥೋತ್ಸವ ಜರಗುವುದು. 
ಮತ್ತು ರಾತ್ರಿ 7-00 ಗಂಟೆಗೆ ಸಂಗೀತ ಕಾರ್ಯಕ್ರಮ : ಶ್ರೀ ದುರ್ಗಾದೇವಿ ಗಾಯನ ಸಂಘ ನಾವಲಗಿ ತಾ|| ಬನಹಟ್ಟಿ ಜಿ|| ಬಾಗಲಕೋಟೆ ಹಾಗೂ ಶ್ರೀ ಬಕೇಶ್ವರ ಗಾಯನ ಸಂಘ ಸಾ|| ಬಾಡಗಿ,  ತಾ|| ಬಿಳಗಿ  ಜಿ|| ಬಾಗಲಕೋಟೆ ಮತ್ತು ಬೀರಲಿಂಗೇಶ್ವರ ಜಾನಪದ ಕಲಾ ತಂಡ ಡೋಣಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. 
ದಿನಾಂಕ: 01-04-2025 ನೇ ಮಂಗಳವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ಜರುಗುವುದು.
ರಾತ್ರಿ 10 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ ಡೋಣಿ 
ಇವರಿಂದ “ಗರುಡ ರಾಜ್ಯದಲ್ಲಿ ಘಟಸರ್ಪ ಅರ್ಥಾತ್: ಬೆಂಕಿಯಲ್ಲಿ ಅರಳಿದ ಹೂವು”. ಎಂಬ ಸುಂದರ ಸಾಮಾಜಿಕ ನಾಟಕ ಇರುತ್ತದೆ.
ದಿನಾಂಕ 05-4-2025 ನೇ ಶನಿವಾರದಂದು ಶ್ರೀ ಹಾಲೇಶ್ವರ ಜಾತ್ರಾ ಅಂಗವಾಗಿ “ರಾಯಣ್ಣ ಎಕ್ಸ್ಪ್ರೆಸ್ ಗ್ರೂಪ್” ಮತ್ತು 
“ಆರ್ ಜೆ ಸರಕಾರ ಗ್ರೂಪ್” ಇವರ ವತಿಯಿಂದ ರಾಜ್ಯಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿದೆ.


ದಾಸೋಹ ಸೇವೆ ಗ್ರಾಮಗಳು: 
ಡೋಣಿ ಹಾಗೂ ಡೋಣಿತಾಂಡ, ಕದಾಂಪುರ, ಚುರ್ಚಿಹಾಳ, ಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಷ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬೀಡನಾಳ ತಾಂಡ, ಬಸಾಪುರ, ಶಿಂಗಟಾಲಕೇರಿ ತಾಂಡ, ಪೇಠಾಲೂರು, ಕವಲೂರು, ಗಂಗಾಪೂರ, ಹೊಸಡಂಬಳ, ಶಿಂಗಟಾಲೂರ, ತಿಪ್ಪಾಪುರ. ಹಾಗೂ ಸುತ್ತಮುತ್ತಲಿನ ಗ್ರಾಮದವರಿಂದ. ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದ ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.
ಉತ್ಸವ ಸಂಘ-ಸಮಿತಿಗಳು : 
ಶ್ರೀ ಹಾಲೇಶ್ವರ ಭಜನಾ ಸಂಘ. ಶ್ರೀ ಈಶ್ವರ ಸೇವಾ ಸಮಿತಿ, ಶ್ರೀ ಶರಣ ಬಸವೇಶ್ವರ ಭಜನಾ ಸಂಘ, ಶ್ರೀ ಸಿದ್ದಲಿಂಗೇಶ್ವರ ಯುವಕ ಮಂಡಳಿ. ಶ್ರೀ ಬೀರಲಿಂಗೇಶ್ವರ ಜನಪದ ಕಲಾ ತಂಡ. ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ, ಶ್ರೀ ದುರ್ಗಮ್ಮ ದೇವಿ ಭಜನಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಡೋಣಿ, ಶ್ರೀ ವೀರಭದ್ರೇಶ್ವರ ಹಾಗೂ ಮಾರುತೇಶ್ವರ ಟ್ರಸ್ಟ. ಶ್ರೀ ಮಾಳಿಂಗರಾಯ ಡೋಳ್ಳಿನ ಮೇಳ. ಡಾಕ್ಟರ್ ಶ್ರೀ ಬಿ.ಆರ್ ಅಂಬೇಡ್ಕರ್ ಸಮಿತಿ. ಭಗತ್ ಸಿಂಗ್ ಅಭಿಮಾನಿ ಬಳಗ. 
ಶ್ರೀ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ. ಜಾಮಿಯಾ ಮಸೀದಿ ಕಮೀಟಿ. ಶ್ರೀ ನಡದಮ್ಮ ಭಜನಾ ಸಂಘ. ಬಂಜಾರಾ ನೃತ್ಯ ಕಲಾ ತಂಡ,ಡೋಣಿತಾಂಡಾ

ದೀಕ್ಷಾ ಅಯ್ಯಾಚಾರಕ್ಕೆ ಸಂಪರ್ಕಿಸಿರಿ :
ಶಿವಯ್ಯ ಕಲ್ಲೂರು ಮಠ       : 8861295526
ಕಿರಣಸ್ವಾಮಿ ಗುರಮ್ಮನಮಠ  : 8105545109

*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಯಮನಪ್ಪ ಈಳಿಗೇರ      : 9731960804
ಈಶಪ್ಪ ಮೇಟಿ                : 8867881496
ಶರಣಪ್ಪ ಜಂತ್ಲಿ               : 9008697905 
ಮಂಜುನಾಥ್ ತಳವಾರ   : 6362476781  
ಶಂಕರಗೌಡ ಹೊಸಮನಿ  : 9740622928 
ವಿನಾಯಕ ಬೆಳಿ ್ಳ          : 9964996434
ಸಲ್ಮಾನ್ ಚಿಕ್ಕೋಪ್ಪ        : 8105253190
ರಮೇಶ್ ಗಾಳಪ್ಪನವರ    : 7353437419 
ವಿ.ಸೂ ಬಾಲ್ಯ ವಿವಾಹ ಹಾಗೂ ಮರು ವಿವಾಹ ಅವಕಾಶ ಇರುವುದಿಲ್ಲ ನೋಂದಣಿಗೆ ಕೊನೆಯ ದಿನಾಂಕ: 21-03-2025 

ದಾಸೋಹ ಸೇವೆ ಗ್ರಾಮಗಳು:  ಡೋಣಿ ಹಾಗೂ ಡೋಣಿ ತಾಂಡ, ಕದಾಂಪುರ, ಚುರ್ಚಿಹಾಳ, ಹೊಸಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ ಹಾಗೂ ಬೀಡನಾಳ ತಾಂಡ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಸ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬಸಾಪುರ, ತಿಪ್ಪಾಪುರ, ಹಾಗೂ ಸುತ್ತ ಮುತ್ತಲಿನ ಗ್ರಾಮದವರಿಂದ ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದಹಾಗೂ ಸ್ತ್ರೀಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು, ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಮತ್ತು ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.

ಹಾಲಸ್ವಾಮಿ ಮಠದ ಭಕ್ತರು  
ಡೋಣಿ ಹಾಲಸ್ವಾಮಿಜೀ ಜಾತ್ರೆ ಕಾರ್ಯಕ್ರಮ - 2025
Sri Sadguru Shivayogi Halasomeshwara Maha Swamiji.Doni


                               

ಸಮಸ್ತ ಮನುಕುಲಕ್ಕೆ ಹೊಸ ದಿನ ಹೊಸತನ ತರಲಿ
ಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ 
ಹೊಸ ಯುಗಾದಿ ಆನಂದ ತರಲಿ.
ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು. 

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ 
ಹಾಲಸ್ವಾಮಿ ಮಠದ ಭಕ್ತರು 
Halaswamy Math

                      

ಬಂಜಾರಾ ನೃತ್ಯ ಕಲಾ ತಂಡ,ಡೋಣಿ ತಾಂಡದ 


 
   ವೀರಪ್ಪಪೂರ ಗ್ರಾಮಸ್ಥರು

          ಬೀಡನಾಳ ಗ್ರಾಮಸ್ಥರು

       ಮುಸ್ಠಿಕೋಪ್ಪ ಗ್ರಾಮಸ್ಥರು

 
        ಬಸಾಪುರ ಗ್ರಾಮಸ್ಥರು

    ಕುರ್ಲಹಳ್ಳಿ ಮತ್ತು ಪ್ಲಾಟ್

ಬೆಣ್ಣೆಹಳ್ಳಿ ಗ್ರಾಮಸ್ಥರು

 ಡೋಣಿ ತಾಂಡ

ಹೊಸ ಡಂಬಳ

ಚುರ್ಚಿಹಾಳ 

ಬೂದಿಹಾಳ ಗ್ರಾಮಸ್ಥರು

ತಿಪ್ಪಪುರ ಗ್ರಾಮಸ್ಥರು

ದಿಂಡೂರು ತಾಂಡಾದ ಸದ್ಭಕ್ತರಿಂದ ಜಾತ್ರಾ ಮಹೋತ್ಸವಕ್ಕೆ ಕಾಣಿಕೆಯನ್ನು ಅರ್ಪಿಸಲಾಯಿತು.


ಜಾತ್ರಾ ದಾಸೋಹಕ್ಕೆ ಡೋಣಿ ತಾಂಡದ ತಾಯಂದಿರೆಲ್ಲ ಸೇರಿ ಹಸನ ಮಾಡುತ್ತಿರುವುದು.

ಗ್ರಾಮದ ಸೈನಿಕರಿಂದ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತಗಳು






                             

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

 ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ದಿ,30/03/2025 ನೇ ರವಿವಾರ ರಿಂದ , ದಿ,1,042025 ನೇ ಮಂಗಳವಾರ ನಡೆಯುವ ಶ್ರೀ ಗುರು ಹಾಲಸೋಮೇಶ್ವರ  ಸಾನಿಧ್ಯದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಶ್ರೀ ಮಠದ ಸಮಸ್ತ ಸದ್ಭಕ್ತರ ಸೇವೆ ಸಹಕಾರದೊಂದಿಗೆ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಗುರು ಹಾಲಸ್ವಾಮಿ ಮಠದ ಪರಂಪರೆಯ ಜಾತ್ರೋತ್ಸವ ,ಧರ್ಮ ಜಾಗೃತಿ ಸಮಾರಂಭನಡೆಸಬೇಕೆನ್ನುವ ವಿಚಾರವನ್ನು ಈಗಾಗಲೇ ಯುಗಾದಿ ಪಾಂಡ್ಯ ಅಮವಾಸ್ಯೆ ಶುಭದಿನ ಎಲ್ಲಾ ಸದ್ಭಕ್ತರಿಗೆ ತಿಳಿಸಿದಂತೆ ದಿನಾಂಕ ಮತ್ತು ಸಮಾರಂಭ ಪತ್ರಿಕೆ ತಯಾರಿಸಲಾಗಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಸ್ತ ಸದ್ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕಾರ್ಯಕ್ರಮದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ತಿಳಿಸುತ್ತಿದ್ದೆವೆ. ಸಭೆಯ ದಿನಾಂಕ: 20.02-2025ನೇ   ಮತ್ತು 21-02-2925 ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ

Doni Halaswamy Jatre Mahotsava-2024 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೪

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 25ನೇ ವರ್ಷದ ರಜತ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.                                   ಕಾರ್ಯಕ್ರಮಗಳು ದಿನಾಂಕ: 06-04-2024ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 09-04-2024ನೇ ಮಂಗಳವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ  ಕರ್ತೃುಗದ್ದುಗಿಗೆಮೂರ್ತಿಗೆ  ಮಹಾರುದ್ರಾಭಿಷೇಕ ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ: 10-04-2024ನೇ ಬುಧವಾರದಂದು ಬೆಳಗ್ಗೆ  1...