ವಿಷಯಕ್ಕೆ ಹೋಗಿ

ಡೋಣಿ ಗ್ರಾಮದಲ್ಲಿ ನೂತನ ಶ್ರೀ ದ್ಯಾಮಮ್ಮ, ಶ್ರೀ ದುರ್ಗಾದೇವಿ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮಗಳು




" ಸರ್ವ ಮಂಗಳ ಮಾಂಗಲ್ಯೇ

ಶಿವೇ ಸರ್ವಾರ್ಥಸಾದಕೆ

ಶರಣು ತ್ರಯಂಬಕೇ ಗೌರಿ
ನಾರಾಯಣಿ ನಮೋಸ್ತುತೆ."

ಗದಗ ಜಿಲ್ಲಾ ಪುಣ್ಯಕ್ಷೇತ್ರ ಡೋಣಿ ಗ್ರಾಮದಲ್ಲಿ
ಶ್ರೀ ಜಗನ್ಮಾತೆ ದುರ್ಗಾದೇವಿಯ ಮತ್ತು ದ್ಯಾಮವ್ವ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ರಾಜಗೋಪುರದ ಕಳಸಾರೋಹಣ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಭವ್ಯ ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆಯನ್ನು ಪರಮಪೂಜ್ಯ ಸದ್ಗುರು ಶಿವಯೋಗಿ ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು

ಈ ಕಾರ್ಯಕ್ರಮಗಳ ದಿವ್ಯ  ಸಾನಿಧ್ಯವನ್ನು ಪರಮಪೂಜ್ಯ ಮರುಳಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು,
(ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ ಅಳವಂಡಿ,ಹೊಳಗುಂದಿ, ಭಾವಿಹಳ್ಳಿ.)

ಪಾವನ ಸಾನಿಧ್ಯವನ್ನು
ಶ್ರೀ ವಿಶ್ವರಾಧ್ಯ
ಹಾಲಸ್ವಾಮಿಗಳವರು ವಹಿಸಿಕೊಂಡಿದ್ದರು.

ಪ್ರಾತಃಕಾಲದಲ್ಲಿ ಗ್ರಾಮದ ಮಧ್ಯೆ ಇರುವ ದೇವಿಯ ನೂತನ ದೇವಾಲಯದಲ್ಲಿ ಹೋಮ ಹವನ ನವಗ್ರಹ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಗುರು ಹಾಲೇಶ್ವರ ಮಠದ ಪಕ್ಕದಲ್ಲಿರುವ ಶ್ರೀದೇವಿಯ ದೇವಸ್ಥಾನದಲ್ಲಿ ನೂತನ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಅತ್ಯಂತ ಸಾಂಗವಾಗಿ ಜರುಗಿದವು.

ಈ ಕಾರ್ಯಕ್ರಮ ಡೋಣಿ ಗ್ರಾಮದ ಸಕಲ ಸದ್ಭಕ್ತರ ಭಕ್ತಿಯ ದ್ಯೋತಕವಾಗಿ ಕಂಡು ಬಂತು. ಡೊಳ್ಳಿನ ಮೇಳಗಳು ದೇವಿಯ ಜೈಕಾರ ಭಕ್ತರ ಭಕ್ತಿಯ ನಾಮದ ಓಂಕಾರ ಹಾಗೂ ಪರಮಪೂಜ್ಯರ ಭವ್ಯ ಮೆರವಣಿಗೆ ಗ್ರಾಮದ ಸಕಲ ಸದ್ಭಕ್ತರೊಂದಿಗೆ  ಗ್ರಾಮದ ಮೂಲ ಅಗಸಿಯ ಸ್ಥಳದಿಂದ ಶ್ರೀ ದ್ಯಾಮವ್ವ ದೇವಿಯ ಮತ್ತು ದುರ್ಗಾದೇವಿಯ ಮಹಾಮೂರ್ತಿಗಳ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಜರಗಿತು. ಶ್ರೀದೇವಿಯ ಕಳಸಾರೋಹಣ ಪವಾಡ ಸದೃಶದಂತೆ ತ್ರಿಮೂರ್ತಿ ಪರಮಪೂಜ್ಯರ ದಿವ್ಯ ಅಮೃತ ಹಸ್ತದಿಂದ ಗ್ರಾಮದ ಸಕಲ ಸದ್ಭಕ್ತರೊಂದಿಗೆ ನಡೆಯಿತು.

ದೇವಿಯನ್ನ ನಂಬಿದರೆ ಜಗನ್ಮಾತೆ ಖಂಡಿತ ಇಂಬು ಕೊಡುತ್ತಾಳೆ. ಅವಳ ಮಹಿಮೆ ಅಪಾರ. ಅಳವಂಡಿಯ ಪರಮಪೂಜ್ಯರು ತಮ್ಮನುಡಿಗಳಲ್ಲಿ ಶ್ರೀ ಗುರು ಹಾಲೇಶ್ವರರು ಭಾಗಳಿ ಗ್ರಾಮದಲ್ಲಿ ಪವಾಡವನ್ನು ತೋರಿಸಿದ ವಿಚಾರವನ್ನು ಜಗನ್ಮಾತೆ ಪ್ರತ್ಯಕ್ಷವಾಗಿ ಮೂಗುತಿ ಕೊಟ್ಟ ಮಹಿಮೆಯನ್ನು ವಿವರಣೆಯಾಗಿ ಮೈಮನ ರೋಮಾಂಚನ ವಾಗುವಂತೆ ತಿಳಿಸಿದರು. ಗ್ರಾಮದ ಸಕಲ ಸದ್ಭಕ್ತರು ಎಲ್ಲರೂ ಒಂದಾಗಿ ಚೆಂದಾಗಿ ಆನಂದದಿಂದ ಎಲ್ಲಾ ದೇವಸ್ಥಾನಗಳ ಹಾಗೂ ಶ್ರೀ ಹಾಲೇಶ್ವರ ಮಠದ ಸೇವೆಯನ್ನ ಮಾಡಬೇಕು ಮತ್ತು ಮುಕ್ತಿಯನ್ನು ಪಡೆಯಬೇಕೆಂದು ತಿಳಿಸಿದರು. ಅನೇಕ ಮಹಾತ್ಮರು ದೇವಿಯ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಶ್ರೀ ಗುರು ಹಾಲೇಶ್ವರರು. ನವಲಗುಂದ ನಾಗಲಿಂಗಪ್ಪನವರು. ಕೊಡಿಕೊಪ್ಪದ ಹುಚ್ಚ ವೀರೇಶ್ವರರು. ಹೊರಕಡ್ಲಿ ಅಜ್ಜನವರು ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು ತಮ್ಮ ಅನುಷ್ಠಾನದಲ್ಲಿ ಜಗನ್ಮಾತೆಯ ದರ್ಶನವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಗ್ರಾಮದ ಸರ್ವ ಮತದಭಕ್ತರು ನಾವೆಲ್ಲ ಒಂದೇ ಭಾರತಾಂಬೆಯ ಮಕ್ಕಳು ಭೇದ ಭಾವಗಳನ್ನು ಮರೆತು ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಉಳಿಸಬೇಕು ಪುನರುಜ್ಜೀವನಗೊಳಿಸಬೇಕು ಎಂದು ಮಾರಿಮಿಕವಾಗಿ ತಿಳಿಸಿದರು.

ಪರಮಪೂಜ್ಯರಿಗೆ ಹಾಗೂ ಸೇವಾ ಸಲ್ಲಿಸಿದ ಸದ್ಭಕ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಗ್ರಾಮದ ಗುರು ಹಿರಿಯರ ಯುವಕರ ಮಕ್ಕಳ ತಾಯಂದಿರ ಸೇವೆ ನೋಡಿ ಆನಂದ ಪಡುವಂತ ಅತ್ಯಂತ ಸುಂದರ ಉತ್ಸವ ಸಾಂಗಮಂಗಲವಾಗಿ ಮಂಗಲ ಗೊಂಡಿತು.



|| ಸರ್ವಮಂಗಲ ಮಾಂಗಲ್ಯ
   ಶಿವೆ ಸರ್ವಾರ್ಥ ಸಾಧಿಕೇ ||

|| ಶರಣ್ಯ ತ್ರಯಂಬಿಕೆ ಗೌರಿ 
  ನಾರಾಯಣಿ ನಮೋಸ್ತುತೇ ||

ಗದಗ ಜಿಲ್ಲಾ ಮುಂಡರಗಿ ತಾಲೂಕ ಡೋಣಿ ಗ್ರಾಮದ ನೂತನ
    " ಶ್ರೀ ದ್ಯಾಮಮ್ಮ, ಶ್ರೀ ದುರ್ಗಾದೇವಿ ಮೂರ್ತಿಗಳ
ವಾಸ್ತು ಶಾಂತಿ, ಹೋಮ ಹವನ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು 
ಇದೇ ಶ್ರೀ ಶಾಲಿವಾಹನ ಶಕೆ 1944 ನೇ ಶುಭಕೃತುನಾಮ ಸಂವತ್ಸರ ಮಾಘ ಶುದ 2, ದಿನಾಂಕ 23-01-2023 ನೇ ಸೋಮವಾರ ಬೆಳಿಗ್ಗೆ

ಡೋಣಿ ಗ್ರಾಮಕ್ಕೆ ನಾತನ ಮೂರ್ತಿಗಳ ಪುರ ಪ್ರವೇಶ ಗ್ರಾಮದ ಬೀದಿಗಳಲ್ಲಿ ತುಂಬ ಮೇಳ ಹಾಗೂ ಡೊಳ್ಳು, ಭಜನಾ ಮೇಳ, ದುರಗಮುರ್ಗಿಯಾರ, ಬೆಂಡಬಾಜಾ, ಗಂಗಾಳ ಭಜನೆ, ನಂದಿ ಕೋಲು ಕುಣಿತಗಳೊಂದಿಗೆ ಮೆರವಣಿಗೆ ಜರಗುವುದು, ತದನಂತರ ವಾಸ್ತು ಶಾಂತಿ, ಹೋಮಹವನ ಜರಗುವುದು.

ಸಾಯಂಕಾಲ 4-00 ಗಂಟೆಗೆ ಶ್ರೀ ಷ. ಬ್ರ. ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಳವಂಡಿ ಕಟ್ಟಮನಿ ಹಿರೇಮಠ ಇವರ ಅಮೃತ ಹಸ್ತದಿಂದ ಕಳಸರೋಹನ ನೇರವೇರುವುದು. 
ನೇತೃತ್ವ : ಶ್ರೀ ಸ. ಶಿ. ಹಾಲಸೋಮೇಶ್ವರ ಸ್ವಾಮಿಗಳು ಡೋಣಿ, 
ವಿಜಯ್ ಮೆಲೋಡಿಸ್ ಹಾಗೂ ಶ್ರೀ ಬೀರಲಿಂಗೇಶ್ವರ ಕಲಾ ತಂಡದವರಿಂದ ರಾತ್ರಿ 8-00 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವದು.

ದಿನಾಂಕ 24-01-2023 ನೇ ಮಂಗಳವಾರ ಬೆಳಿಗ್ಗೆ ಹೋಮ ಹವನಗಳು ನಂತರ ಮೂರ್ತಿ ಪ್ರಾಣಗಳ ಪ್ರತಿಷ್ಠಾಪನ ಕಾರ್ಯಕ್ರಮಗಳು ಜರಗುವುದು.

ಈ ಎಲ್ಲಾ ಕಾರ್ಯಕ್ರಮಗಳ ಪೌರಹಿತ್ಯ : ಶ್ರೀ ನಿವಾಸ ಆಚಾರ್ಯ, ಶ್ರೀ ವಿನಾಯಕ ಆಚಾರ್ಯ, ಶ್ರೀ ದೇವಿಂದ್ರ ಆಚಾರ್ಯ, ಶ್ರೀ ಮೌನೇಶ ಆಚಾರ್ಯ, ಶ್ರೀ ವೀರಣ್ಣ ಅಚಾರ್ಯ ಹಾಗೂ ಸಂಗಡಿಗರೊಂದಿಗೆ ಸಾ|| ವರವಿ ವಿ.ಸೂಚನೆ :- ಶ್ರೀ ಶರಣಬಸವೇಶ್ವರ ಭಜನಾ ಸಂಘದವತಿಯಿಂದ ದಿನಾಂಕ 24-01-2023 ರಂದು ರಾತ್ರಿ 10-00 ಘಂಟೆಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿನಾಂಕ: 23, 24-01-2023 ರಂದು 
ಮಹಾ ಅನ್ನಸಂತರ್ಪಣೆ ನೆರೆವೆರುವುದು. 

ಡೋಣಿ ಗ್ರಾಮದ ಸುತ್ತಮುತ್ತಲನ ಗ್ರಾಮದ ಗುರು ಹಿರಿಯರು ಹಾಗೂ ಸಕಲ ಸದ್ಭಕ್ತರು,
ತಾಯಂದಿರರು, ಯುವಕ ಮಂಡಳ, ಭಜನಾ ಮಂಡಳಿ, ಎಲ್ಲ ಸಂಘ ಸಂಸ್ಥೆಗಳು ವ, ಸರ್ವ ಗ್ರಾಮಸ್ತರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಗುರು ಹಾಲಸ್ವಾಮಿಗಳ ಡೋಣಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ2026: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ.

ಶ್ರೀ ಗುರು ಹಾಲಸ್ವಾಮಿಗಳ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪ ಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ ಪವಿತ್ರ ಪುಣ್ಯಕ್ಷೇತ್ರದ ಆರಾಧ್ಯ ದೈವವಾದ ಶ್ರೀ ಗುರು ಹಾಲಸ್ವಾಮಿಗಳ ವಾರ್ಷಿಕ ಜಾತ್ರಾ ಮಹೋತ್ಸವದ-2026, ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆದ ಈ ಸಭೆಯು ಗ್ರಾಮಸ್ಥರ ಒಗ್ಗಟ್ಟು ಹಾಗೂ ಶ್ರದ್ಧೆಗೆ ಸಾಕ್ಷಿಯಾಯಿತು. ಹಿರಿಯರ ಮಾರ್ಗದರ್ಶನ - ಭಕ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಹಿರಿಯರು ಅತ್ಯಂತ ಉತ್ಸಾಹದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ಗುರುಗಳ ಸೇವೆ ನಮ್ಮ ಭಾಗ್ಯ, ಈ ಬಾರಿಯ ಜಾತ್ರೆಯು ಇಡೀ ನಾಡೇ ಮೆಚ್ಚುವಂತೆ ನಡೆಯಬೇಕು" ಎಂದು ಆಶಿಸಿದರು. ವಿಶೇಷವಾಗಿ, ಯುವಕರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ "ಹೆಗಲಿಗೆ ಹೆಗಲು ಕೊಟ್ಟು" ಕಾರ್ಯನಿರ್ವಹಿಸಲು ಸನ್ನದ್ಧರಾದರು. " ಶ್ರೀ ಗುರು ಹಾಲಪ್ಪಜ್ಜನ ಈ ಬಾರಿಯ ಉತ್ಸವದಲ್ಲಿ ಯಾವುದೇ ಕುಂದು-ಕೊರತೆಗಳು ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಇದು ಕೇವಲ ಸಭೆಯಲ್ಲ, ಇದು ನಮ್ಮ ಭಕ್ತಿಯ ಸಂಕಲ್ಪ" ಎಂದು ಹಿರಿಯರು ಭಾವಪೂರ್ಣವಾಗಿ ನುಡಿದರು. ಶಿಸ್ತುಬದ್ಧ ಆಯೋಜನೆ ಜಾತ್ರೆಯ ಪ್ರತಿಯೊಂದು ಹಂತದಲ್ಲೂ ಅಚ್ಚುಕಟ್ಟುತನ ಕಾಯ್ದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ರಥೋತ್ಸವದ ಸಿದ್ಧತೆ: ಅಲಂಕಾರ...

​🚩 ಡೋಣಿ ಗ್ರಾಮದ ಶ್ರೀಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩​

​🚩 ಶ್ರೀ ಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩 ​ಇಂದು ನಮ್ಮ ಗ್ರಾಮದಲ್ಲಿ ಶ್ರೀ ಗುರು ಹಾಲೇಶನ ರಣಗಂಬ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಹಾಗೂ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಭಕ್ತಿ ಮತ್ತು ಪರಂಪರೆಯ ಈ ಸಮಾಗಮಕ್ಕೆ ಗ್ರಾಮದ ಸಮಸ್ತ ಭಕ್ತವೃಂದ ಸಾಕ್ಷಿಯಾಯಿತು. ​🥁 ಸಾಂಸ್ಕೃತಿಕ ಮೆರುಗು ​ಕಾರ್ಯಕ್ರಮಕ್ಕೆ ಕಳೆ ತಂದಿದ್ದು ಅಬ್ಬರದ ಡ್ರಮ್ ಸೆಟ್ ಮೇಳ ಮತ್ತು ನಾಡಿನ ಸಂಸ್ಕೃತಿಯ ಪ್ರತೀಕವಾದ ಡೊಳ್ಳಿನ ಮೇಳ . ತಾಳ-ಲಯಗಳ ಈ ಜುಗಲ್‌ಬಂದಿ ನೆರೆದಿದ್ದವರಲ್ಲಿ ಹೊಸ ಚೈತನ್ಯ ತುಂಬಿತು. ಇನ್ನು ಸೋಗಲದ ಆರತಿಯನ್ನು ಹಿಡಿದು ಶಿಸ್ತಿನಿಂದ ಸಾಗುತ್ತಿದ್ದ ತಾಯಂದಿರ ಪಾದಯಾತ್ರೆ ಮತ್ತು ಅವರ ಭಕ್ತಿಭಾವ ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿತು. ​✨ ಪೂಜ್ಯರ ದಿವ್ಯ ಸನ್ನಿಧಿ ​ಶ್ರೀಮಠದ ಹಿರಿಯ ಪೂಜ್ಯರಾದ ಶ್ರೀ ಗುರು ಹಾಲ ಸೋಮೇಶ್ವರ ಹಾಲ ಸ್ವಾಮಿಗಳ ಆಶೀರ್ವಾದ, ಕಿರಿಯ ಪೂಜ್ಯರಾದ ಶ್ರೀ ಅಮೃತೇಶ್ವರ ಶ್ರೀಗಳ ಮಾರ್ಗದರ್ಶನ ಹಾಗೂ ಮೌನ ಋಷಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಬಹಳ ಶ್ರದ್ಧ...

ಹಾಲಪ್ಪಜ್ಜನ ಪವಾಡ!ಕಳಸವು ರಥದತ್ತ ಸಾಗುತ್ತಿರುವಾಗ ಅನಿರೀಕ್ಷಿತವಾಗಿ ಸುರಿದ ಮಳೆರಾಯನ ಕೃಪಾಶೀರ್ವಾದ ಇಡೀ ಗ್ರಾಮವನ್ನೇ ಮಡಿಯಾಗಿಸಿತು.

ಶ್ರೀಗುರು ಹಾಲೇಶನ ರಥದ ಕಳಸಾರೋಹಣ:  ಭಕ್ತಿ-ಭಾವದ ಮಳೆಯಲ್ಲಿ ಮಿಂದೆದ್ದ ಡೋಣಿ ಗ್ರಾಮ ಡೋಣಿ ಗ್ರಾಮ: ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಸಾಕ್ಷಿಯಾದ ಡೋಣಿ ಗ್ರಾಮದಲ್ಲಿ, ಶ್ರೀಗುರು ಹಾಲಪ್ಪಜ್ಜನ ರಥದ ಕಳಸಾರೋಹಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಭಕ್ತರ ಸಾಗರ, ಮಂಗಳವಾದ್ಯಗಳ ನಿನಾದ ಮತ್ತು ಮಳೆರಾಯನ ಆಶೀರ್ವಾದದ ನಡುವೆ ಈ ದಿವ್ಯ ಕಾರ್ಯಕ್ರಮವು ಗ್ರಾಮದ ಇತಿಹಾಸದಲ್ಲಿ ಒಂದು ಸ್ಮರಣೀಯ ಪವಾಡದಂತೆ ಭಾಸವಾಯಿತು. ನೂತನ ಗೃಹದಿಂದ ಭಕ್ತಿಯ ಪಯಣ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ್ (KSRTC) ಅವರ ನೂತನ ನಿವಾಸದಿಂದ ಈ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸ ಮನೆಯ ಸಡಗರದೊಂದಿಗೆ, ಮನೆಯಿಂದ ಪ್ರಥಮ ಬಾರಿಗೆ ಪವಿತ್ರ ಕಳಸವನ್ನು ತರುವ ಮೂಲಕ ತಳವಾರ್ ಕುಟುಂಬವು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು. ವೈಭವದ ಮೆರವಣಿಗೆ ಮತ್ತು ಸಾಂಸ್ಕೃತಿಕ ನಿನಾದ ಮೆರವಣಿಗೆಯ ಉದ್ದಕ್ಕೂ ಡೊಳ್ಳು ಮತ್ತು ಡ್ರಮ್ ಸೆಟ್ ಮೇಳಗಳ ಗಂಭೀರ ನಿನಾದ ಮುಗಿಲು ಮುಟ್ಟಿತ್ತು. ಮುತ್ತೈದೆಯರು ಮಂಗಳಾರತಿಯನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದರೆ, ಇಡೀ ವಾತಾವರಣವು ಮಂಗಳಮಯವಾಗಿತ್ತು. ಭಕ್ತಿಯ ಹೊರೆ: ಶ್ರೀ ಯಲ್ಲಪ್ಪ ತಳವಾರ್ ಅವರ ಕಿರಿಯ ಪುತ್ರರಾದ ಮಂಜುನಾಥ್ ತಳವಾರ್ ಅವರು ಶ್ರೀ ಗುರು ಹಾಲೇಶನ ರಥದ ಕಳಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ತಮ್...