ವಿಷಯಕ್ಕೆ ಹೋಗಿ

ಡೋಣಿ ಗ್ರಾಮದಲ್ಲಿ ನೂತನ ಶ್ರೀ ದ್ಯಾಮಮ್ಮ, ಶ್ರೀ ದುರ್ಗಾದೇವಿ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮಗಳು




" ಸರ್ವ ಮಂಗಳ ಮಾಂಗಲ್ಯೇ

ಶಿವೇ ಸರ್ವಾರ್ಥಸಾದಕೆ

ಶರಣು ತ್ರಯಂಬಕೇ ಗೌರಿ
ನಾರಾಯಣಿ ನಮೋಸ್ತುತೆ."

ಗದಗ ಜಿಲ್ಲಾ ಪುಣ್ಯಕ್ಷೇತ್ರ ಡೋಣಿ ಗ್ರಾಮದಲ್ಲಿ
ಶ್ರೀ ಜಗನ್ಮಾತೆ ದುರ್ಗಾದೇವಿಯ ಮತ್ತು ದ್ಯಾಮವ್ವ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ರಾಜಗೋಪುರದ ಕಳಸಾರೋಹಣ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಭವ್ಯ ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆಯನ್ನು ಪರಮಪೂಜ್ಯ ಸದ್ಗುರು ಶಿವಯೋಗಿ ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು

ಈ ಕಾರ್ಯಕ್ರಮಗಳ ದಿವ್ಯ  ಸಾನಿಧ್ಯವನ್ನು ಪರಮಪೂಜ್ಯ ಮರುಳಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು,
(ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ ಅಳವಂಡಿ,ಹೊಳಗುಂದಿ, ಭಾವಿಹಳ್ಳಿ.)

ಪಾವನ ಸಾನಿಧ್ಯವನ್ನು
ಶ್ರೀ ವಿಶ್ವರಾಧ್ಯ
ಹಾಲಸ್ವಾಮಿಗಳವರು ವಹಿಸಿಕೊಂಡಿದ್ದರು.

ಪ್ರಾತಃಕಾಲದಲ್ಲಿ ಗ್ರಾಮದ ಮಧ್ಯೆ ಇರುವ ದೇವಿಯ ನೂತನ ದೇವಾಲಯದಲ್ಲಿ ಹೋಮ ಹವನ ನವಗ್ರಹ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಗುರು ಹಾಲೇಶ್ವರ ಮಠದ ಪಕ್ಕದಲ್ಲಿರುವ ಶ್ರೀದೇವಿಯ ದೇವಸ್ಥಾನದಲ್ಲಿ ನೂತನ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಅತ್ಯಂತ ಸಾಂಗವಾಗಿ ಜರುಗಿದವು.

ಈ ಕಾರ್ಯಕ್ರಮ ಡೋಣಿ ಗ್ರಾಮದ ಸಕಲ ಸದ್ಭಕ್ತರ ಭಕ್ತಿಯ ದ್ಯೋತಕವಾಗಿ ಕಂಡು ಬಂತು. ಡೊಳ್ಳಿನ ಮೇಳಗಳು ದೇವಿಯ ಜೈಕಾರ ಭಕ್ತರ ಭಕ್ತಿಯ ನಾಮದ ಓಂಕಾರ ಹಾಗೂ ಪರಮಪೂಜ್ಯರ ಭವ್ಯ ಮೆರವಣಿಗೆ ಗ್ರಾಮದ ಸಕಲ ಸದ್ಭಕ್ತರೊಂದಿಗೆ  ಗ್ರಾಮದ ಮೂಲ ಅಗಸಿಯ ಸ್ಥಳದಿಂದ ಶ್ರೀ ದ್ಯಾಮವ್ವ ದೇವಿಯ ಮತ್ತು ದುರ್ಗಾದೇವಿಯ ಮಹಾಮೂರ್ತಿಗಳ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಜರಗಿತು. ಶ್ರೀದೇವಿಯ ಕಳಸಾರೋಹಣ ಪವಾಡ ಸದೃಶದಂತೆ ತ್ರಿಮೂರ್ತಿ ಪರಮಪೂಜ್ಯರ ದಿವ್ಯ ಅಮೃತ ಹಸ್ತದಿಂದ ಗ್ರಾಮದ ಸಕಲ ಸದ್ಭಕ್ತರೊಂದಿಗೆ ನಡೆಯಿತು.

ದೇವಿಯನ್ನ ನಂಬಿದರೆ ಜಗನ್ಮಾತೆ ಖಂಡಿತ ಇಂಬು ಕೊಡುತ್ತಾಳೆ. ಅವಳ ಮಹಿಮೆ ಅಪಾರ. ಅಳವಂಡಿಯ ಪರಮಪೂಜ್ಯರು ತಮ್ಮನುಡಿಗಳಲ್ಲಿ ಶ್ರೀ ಗುರು ಹಾಲೇಶ್ವರರು ಭಾಗಳಿ ಗ್ರಾಮದಲ್ಲಿ ಪವಾಡವನ್ನು ತೋರಿಸಿದ ವಿಚಾರವನ್ನು ಜಗನ್ಮಾತೆ ಪ್ರತ್ಯಕ್ಷವಾಗಿ ಮೂಗುತಿ ಕೊಟ್ಟ ಮಹಿಮೆಯನ್ನು ವಿವರಣೆಯಾಗಿ ಮೈಮನ ರೋಮಾಂಚನ ವಾಗುವಂತೆ ತಿಳಿಸಿದರು. ಗ್ರಾಮದ ಸಕಲ ಸದ್ಭಕ್ತರು ಎಲ್ಲರೂ ಒಂದಾಗಿ ಚೆಂದಾಗಿ ಆನಂದದಿಂದ ಎಲ್ಲಾ ದೇವಸ್ಥಾನಗಳ ಹಾಗೂ ಶ್ರೀ ಹಾಲೇಶ್ವರ ಮಠದ ಸೇವೆಯನ್ನ ಮಾಡಬೇಕು ಮತ್ತು ಮುಕ್ತಿಯನ್ನು ಪಡೆಯಬೇಕೆಂದು ತಿಳಿಸಿದರು. ಅನೇಕ ಮಹಾತ್ಮರು ದೇವಿಯ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಶ್ರೀ ಗುರು ಹಾಲೇಶ್ವರರು. ನವಲಗುಂದ ನಾಗಲಿಂಗಪ್ಪನವರು. ಕೊಡಿಕೊಪ್ಪದ ಹುಚ್ಚ ವೀರೇಶ್ವರರು. ಹೊರಕಡ್ಲಿ ಅಜ್ಜನವರು ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು ತಮ್ಮ ಅನುಷ್ಠಾನದಲ್ಲಿ ಜಗನ್ಮಾತೆಯ ದರ್ಶನವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಗ್ರಾಮದ ಸರ್ವ ಮತದಭಕ್ತರು ನಾವೆಲ್ಲ ಒಂದೇ ಭಾರತಾಂಬೆಯ ಮಕ್ಕಳು ಭೇದ ಭಾವಗಳನ್ನು ಮರೆತು ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಉಳಿಸಬೇಕು ಪುನರುಜ್ಜೀವನಗೊಳಿಸಬೇಕು ಎಂದು ಮಾರಿಮಿಕವಾಗಿ ತಿಳಿಸಿದರು.

ಪರಮಪೂಜ್ಯರಿಗೆ ಹಾಗೂ ಸೇವಾ ಸಲ್ಲಿಸಿದ ಸದ್ಭಕ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಗ್ರಾಮದ ಗುರು ಹಿರಿಯರ ಯುವಕರ ಮಕ್ಕಳ ತಾಯಂದಿರ ಸೇವೆ ನೋಡಿ ಆನಂದ ಪಡುವಂತ ಅತ್ಯಂತ ಸುಂದರ ಉತ್ಸವ ಸಾಂಗಮಂಗಲವಾಗಿ ಮಂಗಲ ಗೊಂಡಿತು.



|| ಸರ್ವಮಂಗಲ ಮಾಂಗಲ್ಯ
   ಶಿವೆ ಸರ್ವಾರ್ಥ ಸಾಧಿಕೇ ||

|| ಶರಣ್ಯ ತ್ರಯಂಬಿಕೆ ಗೌರಿ 
  ನಾರಾಯಣಿ ನಮೋಸ್ತುತೇ ||

ಗದಗ ಜಿಲ್ಲಾ ಮುಂಡರಗಿ ತಾಲೂಕ ಡೋಣಿ ಗ್ರಾಮದ ನೂತನ
    " ಶ್ರೀ ದ್ಯಾಮಮ್ಮ, ಶ್ರೀ ದುರ್ಗಾದೇವಿ ಮೂರ್ತಿಗಳ
ವಾಸ್ತು ಶಾಂತಿ, ಹೋಮ ಹವನ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಗಳು 
ಇದೇ ಶ್ರೀ ಶಾಲಿವಾಹನ ಶಕೆ 1944 ನೇ ಶುಭಕೃತುನಾಮ ಸಂವತ್ಸರ ಮಾಘ ಶುದ 2, ದಿನಾಂಕ 23-01-2023 ನೇ ಸೋಮವಾರ ಬೆಳಿಗ್ಗೆ

ಡೋಣಿ ಗ್ರಾಮಕ್ಕೆ ನಾತನ ಮೂರ್ತಿಗಳ ಪುರ ಪ್ರವೇಶ ಗ್ರಾಮದ ಬೀದಿಗಳಲ್ಲಿ ತುಂಬ ಮೇಳ ಹಾಗೂ ಡೊಳ್ಳು, ಭಜನಾ ಮೇಳ, ದುರಗಮುರ್ಗಿಯಾರ, ಬೆಂಡಬಾಜಾ, ಗಂಗಾಳ ಭಜನೆ, ನಂದಿ ಕೋಲು ಕುಣಿತಗಳೊಂದಿಗೆ ಮೆರವಣಿಗೆ ಜರಗುವುದು, ತದನಂತರ ವಾಸ್ತು ಶಾಂತಿ, ಹೋಮಹವನ ಜರಗುವುದು.

ಸಾಯಂಕಾಲ 4-00 ಗಂಟೆಗೆ ಶ್ರೀ ಷ. ಬ್ರ. ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಳವಂಡಿ ಕಟ್ಟಮನಿ ಹಿರೇಮಠ ಇವರ ಅಮೃತ ಹಸ್ತದಿಂದ ಕಳಸರೋಹನ ನೇರವೇರುವುದು. 
ನೇತೃತ್ವ : ಶ್ರೀ ಸ. ಶಿ. ಹಾಲಸೋಮೇಶ್ವರ ಸ್ವಾಮಿಗಳು ಡೋಣಿ, 
ವಿಜಯ್ ಮೆಲೋಡಿಸ್ ಹಾಗೂ ಶ್ರೀ ಬೀರಲಿಂಗೇಶ್ವರ ಕಲಾ ತಂಡದವರಿಂದ ರಾತ್ರಿ 8-00 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವದು.

ದಿನಾಂಕ 24-01-2023 ನೇ ಮಂಗಳವಾರ ಬೆಳಿಗ್ಗೆ ಹೋಮ ಹವನಗಳು ನಂತರ ಮೂರ್ತಿ ಪ್ರಾಣಗಳ ಪ್ರತಿಷ್ಠಾಪನ ಕಾರ್ಯಕ್ರಮಗಳು ಜರಗುವುದು.

ಈ ಎಲ್ಲಾ ಕಾರ್ಯಕ್ರಮಗಳ ಪೌರಹಿತ್ಯ : ಶ್ರೀ ನಿವಾಸ ಆಚಾರ್ಯ, ಶ್ರೀ ವಿನಾಯಕ ಆಚಾರ್ಯ, ಶ್ರೀ ದೇವಿಂದ್ರ ಆಚಾರ್ಯ, ಶ್ರೀ ಮೌನೇಶ ಆಚಾರ್ಯ, ಶ್ರೀ ವೀರಣ್ಣ ಅಚಾರ್ಯ ಹಾಗೂ ಸಂಗಡಿಗರೊಂದಿಗೆ ಸಾ|| ವರವಿ ವಿ.ಸೂಚನೆ :- ಶ್ರೀ ಶರಣಬಸವೇಶ್ವರ ಭಜನಾ ಸಂಘದವತಿಯಿಂದ ದಿನಾಂಕ 24-01-2023 ರಂದು ರಾತ್ರಿ 10-00 ಘಂಟೆಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿನಾಂಕ: 23, 24-01-2023 ರಂದು 
ಮಹಾ ಅನ್ನಸಂತರ್ಪಣೆ ನೆರೆವೆರುವುದು. 

ಡೋಣಿ ಗ್ರಾಮದ ಸುತ್ತಮುತ್ತಲನ ಗ್ರಾಮದ ಗುರು ಹಿರಿಯರು ಹಾಗೂ ಸಕಲ ಸದ್ಭಕ್ತರು,
ತಾಯಂದಿರರು, ಯುವಕ ಮಂಡಳ, ಭಜನಾ ಮಂಡಳಿ, ಎಲ್ಲ ಸಂಘ ಸಂಸ್ಥೆಗಳು ವ, ಸರ್ವ ಗ್ರಾಮಸ್ತರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

 ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ದಿ,30/03/2025 ನೇ ರವಿವಾರ ರಿಂದ , ದಿ,1,042025 ನೇ ಮಂಗಳವಾರ ನಡೆಯುವ ಶ್ರೀ ಗುರು ಹಾಲಸೋಮೇಶ್ವರ  ಸಾನಿಧ್ಯದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಶ್ರೀ ಮಠದ ಸಮಸ್ತ ಸದ್ಭಕ್ತರ ಸೇವೆ ಸಹಕಾರದೊಂದಿಗೆ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಗುರು ಹಾಲಸ್ವಾಮಿ ಮಠದ ಪರಂಪರೆಯ ಜಾತ್ರೋತ್ಸವ ,ಧರ್ಮ ಜಾಗೃತಿ ಸಮಾರಂಭನಡೆಸಬೇಕೆನ್ನುವ ವಿಚಾರವನ್ನು ಈಗಾಗಲೇ ಯುಗಾದಿ ಪಾಂಡ್ಯ ಅಮವಾಸ್ಯೆ ಶುಭದಿನ ಎಲ್ಲಾ ಸದ್ಭಕ್ತರಿಗೆ ತಿಳಿಸಿದಂತೆ ದಿನಾಂಕ ಮತ್ತು ಸಮಾರಂಭ ಪತ್ರಿಕೆ ತಯಾರಿಸಲಾಗಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಸ್ತ ಸದ್ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕಾರ್ಯಕ್ರಮದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ತಿಳಿಸುತ್ತಿದ್ದೆವೆ. ಸಭೆಯ ದಿನಾಂಕ: 20.02-2025ನೇ   ಮತ್ತು 21-02-2925 ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫

ಜಾತ್ರಾ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ. ರಣಗಂಬ  ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ.  ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ  ಹಾಗೂ ಅಯ್ಯಾಚಾರ ಕಾರ್ಯಕ್ರಮ,  ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ  ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರ...

Doni Halaswamy Jatre Mahotsava-2024 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೪

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 25ನೇ ವರ್ಷದ ರಜತ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.                                   ಕಾರ್ಯಕ್ರಮಗಳು ದಿನಾಂಕ: 06-04-2024ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 09-04-2024ನೇ ಮಂಗಳವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ  ಕರ್ತೃುಗದ್ದುಗಿಗೆಮೂರ್ತಿಗೆ  ಮಹಾರುದ್ರಾಭಿಷೇಕ ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ: 10-04-2024ನೇ ಬುಧವಾರದಂದು ಬೆಳಗ್ಗೆ  1...